ಕಾಳು ನೀಡು ಹಕ್ಕಿಗಳಿಗೆ

ಕಾಳು ನೀಡು ಹಕ್ಕಿಗಳಿಗೆ
ಕಾಳಿಗವೇ ಕಾರಣ
ನೀರು ನೀಡು ಮರಗಳಿಗೆ
ನೀರಿಗವೇ ಕಾರಣ

ನಿನ್ನೆಯ ನೆನೆ-ಈ ದಿನಕೆ
ನಿನ್ನೆಯೇ ಕಾರಣ
ಈ ದಿನ ಜೋಪಾನ-
ನಾಳೆಗೀ ದಿನವೇ ಕಾರಣ

ಯಾರು ನೇಯ್ದ ಮಹಾಜಾಲ
ವಿಶ್ವವೆಂಬೀ ಅಚ್ಚರಿ
ಅಲ್ಲಿ ಬಿಸಿಲು ಇಲ್ಲಿ ಮಳೆ
ಇಂದ್ರಚಾಪದೀಪರಿ

ನೀನು ನಾನು ಅವನು ಅವಳು
ಅದುವು ಇದುವು ಎಲ್ಲವೂ
ಒಂದೆ ದೋಣಿಯಲ್ಲಿ ಯಾನ
ಮುಳುಗಿದರೆ ಸಮಸ್ತವೂ

ಜ್ಞಾನಿಯೇ ವಿಜ್ಞಾನಿಯೇ
ಮುಗ್ಧನೇ ಪ್ರಬುದ್ಧನೇ
ಶುದ್ಧನೇ ಮಹಾ ಬುದ್ಧನೇ
ಅನಿಸು ನಾನು ನಿಮ್ಮವನೆ
*****

One thought on “0

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕವಿತರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಹ್ಯಾಕಾಶದ ಕಥೆ
Next post ನನ್ನವರು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys